ಮಾನೀಯ ಕಥನದ ಸಂದೇಶಾತ್ಮಕ ಚಿತ್ರ ರೇಟಿಂಗ್ : 3/5 ***
Posted date: 29 Fri, Sep 2023 09:16:34 PM
ಚಿತ್ರ: ತೋತಾಪುರಿ 2
ನಿರ್ದೇಶನ: ವಿಜಯಪ್ರಸಾದ್
ತಾರಾಗಣ: ಜಗ್ಗೇಶ್, ಧನಂಜಯ್, ಅದಿತಿ ಪ್ರಭುದೇವ, ಸುಮನ್ ರಂಗನಾಥ್, ದತ್ತಣ್ಣ, ವೀಣಾ ಸುಂದರ್ ಮತ್ತಿತರರು
 
ಜಾತಿ,ಧರ್ಮಕ್ಕಿಂತ ಮಿಗಿಲಾದುದು ಮನುಷ್ಯ ಸಂಬಂಧ ಎನ್ನುವ ಮಾನವೀಯ ಕಥನದ ತಿರುಳು ಹೊಂದಿರುವ ಸಂದೇಶಾತ್ಮಕ ಚಿತ್ರ “ ತೋತಾಪುರಿ-2”.
 
ಒಳ್ಳೆಯ ಸಂದೇಶ, ಕಥೆ ಚಿತ್ರವನ್ನು ಮುಂದಿಟ್ಟುಕೊಂಡು ನಿರ್ದೇಶಕ ವಿಜಯ್ ಪ್ರಸಾದ್, ಚೇಷ್ಠೆ,ಕುಚೇಷ್ಠೆ, ಕಪಿಚೇಷ್ಟೇಗಳಿಂದ ವಿಜೃಂಬಿಸಬೇಕಾಗಿದ್ದ ಸಂದೇಶ, ಸಾಮರಸ್ಯದ ತಿರುಳು .
 
ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಸಿಗಬೇಕು ಎನ್ನುವ ಸಾಮಾಜಿಕ ಕಳಕಳಿ ಇದೆ,ಇಂತಹ ಕಥೆಯನ್ನು ಮುಂದಿಟ್ಟುಕೊಂಡು ಅದ್ಬುತವಾದ ಚಿತ್ರ ಕಟ್ಟಿಕೊಡುವ ಎಲ್ಲಾ ಸಾಧ್ಯತೆಗಳೂ ನಿರ್ದೇಶಕರಿಗಿತ್ತು.
 
ಈರೇಗೌಡ ಮತ್ತು ಶಕೀಲ ಬಾನು ಪ್ರೇಮಕಥೆ, ನಾರಾಯಣ್ ಪಿಳ್ಳೈ ಮತ್ತು ವಿಕ್ಟೋರಿಯಾ ಲವ್ ಎರಡೂ ಕಥೆಗಳು ಗಮನ ಸೆಳೆದಿವೆ.
 
ಚಿತ್ರದಲ್ಲಿ ತೋತಾಪುರಿ ಚಿತ್ರದಲ್ಲಿ ದ್ವಂದರ್ಥದ  ಸಂಭಾಷಣೆಗಳು ವಿಜೃಂಬಿಸಿದ್ದವು. ಭಾಗ-2 ರಲ್ಲಿ ನಿರ್ಮಾಪಕ ಕೆ ಎ ಸುರೇಶ್ ಅವರ ಮುತುವರ್ಜಿ, ಆಸಕ್ತಿ ಒಳ್ಳೆಯ ಚಿತ್ರ ನಿಡಬೇಕು ಎನ್ನುವ ಸದುದ್ದೇಶದಿಂದ ಆದಷ್ಟು ದ್ವಂದ್ವಾರ್ಥಗಳ ಸಂಭಾಷಣೆಗೆ ಕಡಿವಾಣ ಹಾಕುವ ಸಾಕಷ್ಟು ಪ್ರಯತ್ನ ಮಾಡಿದ್ದಾರೆ, ಊಟಕ್ಕೆ ಉಪ್ಪಿನ ಕಾಯಿ ರೀತಿ ಇರಬೇಕಾದ್ದ ಚೇಷ್ಟೇ, ದ್ವಂದಾರ್ಥ ಇಡೀ ಊಟವೇ ಆಗಿರುವಾಗ ಅದನ್ನು ನಿಭಾಯಿಸಲು ನಿರ್ಮಾಪಕರು ಶ್ರಮಪಟ್ಟಿದ್ದಾರೆ.

ನಟ ಜಗ್ಗೇಶ್, ಧನಂಜಯ್, ಅದಿತಿ ಪ್ರಭುದೇವ, ಸುಮನ್ ರಂಗನಾಥ್ ಮತ್ತು ವೀಣಾ ಸುಂದರ್ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಅನುಭವಿ ಕಲಾವಿದರು ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ. ಅದ್ಬುತ ಕಲಾವಿದರಿರುವ ಚಿತ್ರವನ್ನು ನಿರ್ದೇಶಕರು ಚೇಷ್ಠೆ ಸಂಭಾಷಣೆಗೆ ಸೀಮಿತಗೊಳಿಸುವ ಪ್ರಯತ್ನ ಮಾಡಿದ್ಧಾರೆ

ಛಾಯಾಗ್ರಾಹಕ ನಿರಂಜನ್ ಬಾಬು ಮಧ್ಯಮವರ್ಗದ  ಜನರ ಬದುಕು ಬವಣೆಯ ಪರಿಸರವನ್ನು ಕಣ್ಣಿಗೆ ಕಟ್ಟುವಣತೆ ಸೆರೆಯಿಡಯಿಯುವಲ್ಲಿ ಯಶಸ್ವಿಯಾಗಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed